Breaking News
Home / Recent Posts / “ಮೌಲ್ಯಗಳಮಹಾಸಂಗಮಮಹಾತ್ಮಾಗಾoಧಿ”

“ಮೌಲ್ಯಗಳಮಹಾಸಂಗಮಮಹಾತ್ಮಾಗಾoಧಿ”

Spread the love

ಹಾರೂಗೇರಿ: ಸಿರಿತನˌಬಡತನ ಕುಟುಂಬಗಳ ಹಿನ್ನೆಲೆ ಹೊಂದಿದ್ದ ಮಹಾತ್ಮಾಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಜಿಯವರು ದೇಶಕ್ಕಾಗಿ ತಮ್ಮ ದದುಕು ಮುಡಿಪಾಗಿಟ್ಟ ಮಹಾನುಭಾವರೆಂದು ಹಿರಿಯ ಶಿಕ್ಷಕ ಎಸ್.ವಾಯ್.ಗಸ್ತಿ ಹೇಳಿದರು.

ಅವರು ಸಮಿಪದ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಮಹಾತ್ಮಾಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಬ್ಬರು ಮಹಾನಾಯಕರು ನೀಡಿದ ಜೀವನಾದರ್ಶಗಳ ಗೆಳೆತನ ಬೆಳೆಸಿಕೊಳ್ಳೋಣವೆಂದು ಆಶಿಸಿದರು.

ಸಸಿದಾನಿˌಸಾಧಕ ಶಿವಾನಂದ ರಡರಟ್ಟಿ ಮಾತನಾಡಿ ಶಾಂತಿˌಸಹನೆˌಅಹಿoಸೆˌ ಸೇವಾಪ್ರೇಮಗಳಿoದ ರಾಷ್ಟ್ರಕ್ಕೆ ಮಹಾಕೊಡುಗೆ ಕೊಟ್ಟ ಮಹಾತ್ಮಾಗಾಂಧಿ ಮತ್ತು ಲಾಲಬಹಾದ್ದೂರ ಶಾಸ್ತ್ರಿಯವರು ಸೃಜಿಸಿದ ರಾಜಪಥದಲ್ಲಿ ಮುನ್ನಡೆಯುವ ಅತ್ಯಗತ್ಯತೆಯನ್ನು ತಿಳಿಸಿದರು. ಮುಖ್ಯೋಪಾಧ್ಯಾಯ ಆರ್.ಎಮ್.ಪಾಟೀಲ ಸಮಾರೋಪ ನುಡಿಯಾಡುತ್ತಾ ಮೌಲ್ಯಗಳ ಮೇರುಪರ್ವತದಂತಿರು ವಮಹಾತ್ಮಾಗಾಂಧಿ ಹಾಗೂ ಲಾಲಬಹಾದ್ದೂರ ಶಾಸ್ತ್ರಿಯವರ ಜೀವನತತ್ವಗಳನ್ನು ಮೈಗೂಡಿಸಿಕೊಳ್ಳೋಣವೆಂದು ಉಸುರಿದರು.

ಜಯಂತಿ ಸವಿನೆನಪಿಗಾಗಿ ಯುವಕ ಶಿವಾನಂದ ರಡರಟ್ಟಿˌ ಶಿಕ್ಷಕ ಶ್ರೀಕಾಂತ ಹಳ್ಳೂರರವರು ಹತ್ತುಹಲವು ಸಸಿಗಳನ್ನು ಶಾಲೆಗೆ ದಾನನೀಡಿದರು. ಶಿಕ್ಷಕರು ಸಸಿ ನೆಟ್ಟು ಶ್ರಮದಾನ ಮಾಡಿ ಸಂಭ್ರಮಿಸಿದರು.

ಕಳೆದ ಹತ್ತು ದಿನಗಳಿಂದ ಮಕ್ಕಳಿಗೆ ಗಾಂಧೀಜಿಯವರ ಜೀವನಮೌಲ್ಯಗಳ ಕುರಿತು “ವಿದ್ಯಾಗಮ” ಅನುಷ್ಠಾನ ಸಂದರ್ಭದಲ್ಲಿ ವಿವಿಧ ಚಟುವಟಿಕೆಗಳನ್ನು ನೀಡಿರುವುದರಿಂದ ಕಾರ್ಯಕ್ರಮ ಯಶಸ್ಸಿನತ್ತ ಹೆಜ್ಜೆಹಾಕಿ ಸಂಪನ್ನಗೊoಡಿತು.

ಕಾರ್ಯಕ್ರಮದಲ್ಲಿ ಎಸ್.ಎಸ್.ಕಾಂಬಳೆˌ ಎನ್.ಎಸ್.ಕಾಂಬಳೆˌ ಎಮ್.ಕೆ.ಕಳ್ಳಿಗುದ್ದಿˌ ಶ್ರೀಮತಿ ಎಲ್.ಎಸ್.ಮಗದುಮ್ˌ ಚಿದಾನಂದ ಹಲಕಿˌ ಸವಿತಾ ಸನಸನ್ನಿˌ ಶಾನೂರ ಉಪಸ್ಥಿತರಿದ್ದರು. ಶ್ರೀಮತಿ ಎಸ್.ಪಿ.ಮಗೆಣ್ಣವರ ಸ್ವಾಗತಿಸಿದರು. ಎಸ್.ಬಿ.ಹಳ್ಳೂರ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ

Spread the loveಮೂಡಲಗಿ: ತಾಲೂಕಿನ ಪಟ್ಟಗುಂದಿ ಗ್ರಾಮದಲ್ಲಿ ಶ್ರೀ ಜಡಿಸಿದ್ಧೇಶ್ವರ ರಥೋತ್ಸವ ಅಪಾರ ಜನಸಮೂಹ ಮಧ್ಯೆ ಶುಕ್ರವಾರ ಸಂಜೆ ಜರುಗಿತು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ