ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸುಭಾಸ ಢವಳೇಶ್ವರಿಗೆ ಸತ್ಕಾರ
ಮೂಡಲಗಿ: ಸಹಕಾರಿ ಸಂಘಗಳು ಪ್ರಗತಿ ಹೊಂದಲು ಸೊಸಾಯಿಟಿಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ನಿಸ್ವಾರ್ಥ ಸೇವೆ ಬಹಳ ಮುಖ್ಯವಾಗಿದೆ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಹಾಗೂ ದಿ.ಮೂಡಲಗಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸುಭಾಸ ಗಿ.ಢವಳೇಶ್ವರ ಹೇಳಿದರು.
ಶುಕ್ರವಾರದಂದು ಪಟ್ಟಣದ ನಂದಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೋಸೈಟಿಯ ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಸೋಸಾಯಿಟಿಯ ಆಡಳಿತ ಮಂಡಳಿಯಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಈ ಸಮಯದಲ್ಲಿ ಸೋಸೈಯಿಟಿಯ ಅಧ್ಯಕ್ಷ ಬಸವರಾಜ ಶೆಕ್ಕಿ, ಉಪಾಧ್ಯಕ್ಷ ಶೀವಲಿಂಗಪ್ಪ ಕುಂದರಗಿ, ನಿರ್ದೇಶಕರಾದ ಬಸಪ್ಪ ಬಳಿಗಾರ, ಬಸವರಾಜ ಢವಳೇಶ್ವರ, ಬಾಳಪ್ಪಾ ಶೆಕ್ಕಿ, ಸಂತೋಷ ಪಟ್ಟಣಶೆಟ್ಟಿ, ಬಾಬು ಬಾಗವಾನ, ಪರಸಪ್ಪ ಗೋಟುರ, ಮಲ್ಲಪ್ಪ ಕೋರಿಶೆಟ್ಟಿ, ಕೆಂಚವ್ವಾ ಗುಡ್ಲಮನಿ, ಲಕ್ಷ್ಮೀ ಕೋರಡ್ಡಿ, ದೀಪಕ ನಾಗಣ್ಣವರ, ಮಹಾದೇವ ದಳವಾಯಿ, ಕಾರ್ಯದರ್ಶಿ ಶಿವರಾಜ ರಂಜನಗಿ, ದಿ.ಮೂಡಲಗಿ ಸಹಕಾರಿ ಬ್ಯಾಂಕಿನ ನಿರ್ದೇಶಕ ರುದ್ರಪ್ಪ ವಾಲಿ, ಪ್ರಕಾಶ ಮೂಧೋಳ, ಅರಬಾವಿ ಬಿಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮತ್ತಿತರು ಇದ್ದರು.
