ಮೂಡಲಗಿ: ನೂರಾರು ಸಂಖ್ಯೆಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಸಂತರು ತಾಳ, ಮೃದಂಗಗಳೊಂದಿಗೆ ಭಜನೆ, ಧ್ಯಾನಗಳ ಮೂಲಕ ಇಲ್ಲಿಯ ವಿಠ್ಠಲ ಮಂದಿರದಲ್ಲಿ ವಾರ್ಷಿಕ ಉತ್ಸವ ಕಾರ್ಯಕ್ರಮವು ನಾಲ್ಕು ದಿನಗಳ ವರೆಗೆ ಭಕ್ತಿಭಾವದಲ್ಲಿ ಜರುಗಿತು. ಪ್ರಾರಂಭದಲ್ಲಿ ಸಂತರಿಂದ ಗ್ರಂಥ ಸ್ಥಾಪನೆ, ಹರಿಪಾಠ, ಪ್ರವಚನ, ಕೀರ್ತನೆಗಳು, ಮಂಗಳಾರತಿ, ದಿಂಡಿ ಉತ್ಸವ, ಗೋಪಾಲ ಕಾಲಾ ಕಾರ್ಯಕ್ರಮಗಳು ಜರುಗಿದವು. ವಿಠ್ಠಲ ದೇವರ ಅಲಂಕೃತ ಪಾಲಕಿ ಉತ್ಸವವು ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡು ಹಣಮಂತ ದೇವರ ದೇವಸ್ಥಾನಕ್ಕೆ ತೆರಳಿ ಮರಳಿ ವಿಠ್ಠಲ …
Read More »TimeLine Layout
ಆಗಷ್ಟ್, 2022
-
23 ಆಗಷ್ಟ್
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕ ಘಟಕದ ಪದಾಧಿಕಾರಿಗಳಿಗೆ ಸತ್ಕಾರ
ಮೂಡಲಗಿ : ಸಮಾಜದ ತಪ್ಪು ತಡೆಗಳನ್ನು ಪತ್ರಿಕೆ, ಮಾಧ್ಯಮಗಳಲ್ಲಿ ಬಿತ್ತರಿಸಿ,ಸರ್ಕಾರದ ಗಮನಕ್ಕೆ ತರುತ್ತ,ತಮ್ಮ ಜೀವನದ ಬಹುಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಪತ್ರಿಕಾ ಮಿತ್ರರ ಕಾರ್ಯ ಪ್ರಶಂಸನೀಯವಾದದ್ದು ಎಂದು ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹದೇವ ಶೆಕ್ಕಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕೀಹೊಳಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಸತ್ಕಾರ ಸಮಾರಂಭದಲ್ಲಿ …
Read More » -
23 ಆಗಷ್ಟ್
ಜೈವಿಕ ರಸಗೊಬ್ಬರದ ಮಹತ್ವ ಕುರಿತು ರೈತರಿಗೆ ಮಾಹಿತಿ ಕಾರ್ಯಕ್ರಮ
ಮೂಡಲಗಿ ಆ.22 : ಮಣ್ಣಿನ ಫಲವತ್ತತೆ ಹೆಚ್ಚುವುದರಿಂದ, ಬೆಳೆಯ ಹೆಚ್ಚಿನ ಇಳುವರಿ ಪಡೆಯಬಹುದು. ರೈತರು ರಾಸಾಯನಿಕ ಗೊಬ್ಬರಗಳಿಗೆ ಮಾರುಹೋಗದೆ ಜೈವಿಕ ರಸಗೊಬ್ಬರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕೆಂದು ಕೃಷಿ ಸಂಯೋಜಕರಾದಂತ ಸಚಿನ್ ಕಬ್ಬೂರ ರವರು ರೈತರಿಗೆ ಕಿವಿಮಾತು ಹೇಳಿದರು. ರವಿವಾರದಂದು ತಾಲೂಕಿನ ಯಾದವಾಡ ಗ್ರಾಮದ ಮುಖಂಡರಾದ ಹಣಮಂತಗೌಡ ರಾಮನಗೌಡ ಪಾಟೀಲರ ತೋಟದಲ್ಲಿ ಜೈವಿಕ ರಸಗೊಬ್ಬರದ ಮಹತ್ವ ಕುರಿತು ರೈತರಿಗೆ ಮಾಹಿತಿ ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಿನ ರೈತರು …
Read More » -
22 ಆಗಷ್ಟ್
ಸೋಬಾನ ಪದಗಳ ಹಾಡುಗಾರ್ತಿ ಕಾಶವ್ವ ಪೂಜೇರಿ ಇನ್ನಿಲ್ಲಾ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನಡೆಯುವ ಮದುವೆ, ಮುಂಜೆ, ಮನೆಗಳಲ್ಲಿ ಜರುಗುವ ವಿವಿಧ ಸಭೆ, ಸಮಾರಂಭಗಳಲ್ಲಿ ತಪ್ಪದೇ ಹಾಜರಾಗಿ ಜನಪದ ಹಾಡುಗಳನ್ನು ಹಾಡುತ್ತಾ, ನಾಡಿನ ಜನಪದ, ಕಲೆ, ಸಂಸ್ಕøತಿ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸಲು ಇಂದಿನ ಪೀಳಿಗೆಗಳಲ್ಲಿ ಜನಪದ ಹಾಡುಗಳನ್ನು ಪರಿಚಯಿಸುತ್ತಾ ಬಂದಿರುವ ಬೆಟಗೇರಿ ಗ್ರಾಮದ ಕ್ಷತ್ರೀಯ ಸಮಾಜದ ಹಿರಿಯ ಜೀವಿ, ಸೋಬಾನ ಪದಗಳ ಹಾಡುಗಾರ್ತಿ, ಸ್ಥಳೀಯ ಜನಪದ ಹಾಡುಗಳ ಗಾನಕೋಗಿಲೆ ಕಾಶವ್ವ ಭರಮಪ್ಪ ಪೂಜೇರಿ(90)ಅವರು ಆ.21ರಂದು ನಿಧನರಾದರು. ಮೃತರು …
Read More » -
22 ಆಗಷ್ಟ್
ಬೆಟಗೇರಿಯಲ್ಲಿ ಜರುಗಲಿರುವ 38ನೇ ಸತ್ಸಂಗ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ಆ.29 ರಿಂದ ಸೆ.2ರ ವರೆಗೆ ನಡೆಯಲಿರುವ 38ನೇ ಸತ್ಸಂಗ ಸಮ್ಮೇಳನದ ಆಯೋಜನೆಯ ಹಿನ್ನಲೆಯಲ್ಲಿ ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಇಚೆಗೆ ಸತ್ಸಂಗ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸ್ಥಳೀಯ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಮಾತನಾಡಿ, ಬೆಟಗೇರಿ ಗ್ರಾಮದಲ್ಲಿ ಇದೇ ಆ.29ರಿಂದ ಸೆ.2ರವರೆಗೆ ನಡೆಯಲಿರುವ 38ನೇ ಸತ್ಸಂಗ ಸಮೇಳನದ ಸಮಗ್ರ ಯಶಸ್ವಿಗೆ ಇಲ್ಲಿಯ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, …
Read More » -
22 ಆಗಷ್ಟ್
ಬೆಟಗೇರಿ ಪ್ರೌಢ ಶಾಲೆಯಲ್ಲಿ ಸದ್ಭಾವನಾ ದಿನ ಆಚರಣೆ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಸದ್ಭಾವನಾ ದಿನ ಆಚರಣೆ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು, ಸದ್ಭಾವನಾ ದಿ, ಪ್ರತಿಜ್ಞಾ ವಿಧಿ ಸ್ವೀಕಾರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರು, ಸಿಬ್ಬಂದಿಗೆ ಜಾತಿ, ಮತ, ಧರ್ಮ, ಪ್ರದೇಶ ಹಾಗೂ ಭಾಷೆಯಬೇಧ ಭಾವವಿಲ್ಲದೇ ಸೌಹಾರ್ದಕ್ಕಾಗಿ ಕಾರ್ಯನಿರ್ವಹಿಸುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಮೋಹನ ತುಪ್ಪದ, …
Read More » -
22 ಆಗಷ್ಟ್
‘ಶ್ರದ್ಧೆ, ಪರಿಶ್ರಮದಿಂದ ಕಾರ್ಯಮಾಡಿದರೆ ಯಶಸ್ಸು ಕಂಡಿತವಾಗಿ ದೊರೆಯುತ್ತದೆ’ – ಜಡಿಸಿದ್ಧೇಶ್ವರಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ
ಸಿಎ ಪಾಸು ಮಾಡಿರುವ ಬಾಹುಬಲಿಗೆ ಅಭಿನಂದನಾ ಸಮಾರಂಭ ಮೂಡಲಗಿ: ‘ಶ್ರದ್ಧೆ, ಪರಿಶ್ರಮದಿಂದ ಕಾರ್ಯಮಾಡಿದರೆ ಯಶಸ್ಸು ಕಂಡಿತವಾಗಿ ದೊರೆಯುತ್ತದೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಹೇಳಿದರು. ಸಮೀಪದ ಪಟಗುಂದಿ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ಲೆಕ್ಕಪರಿಶೋಧನಾ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಬಾಹುಬಲಿ ಹೊಸಮನಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಛಲ ಇರಬೇಕು ಅದರೊಂದಿಗೆ ಪ್ರಯತ್ನ ಇರಬೇಕು ಎಂದರು. ಪಟಗುಂದಿ ಗ್ರಾಮದ ಬಾಹುಬಲಿ …
Read More » -
21 ಆಗಷ್ಟ್
ಮೋಬೈಲ ಯುಗದಲ್ಲಿ ಸಂಭಂದಗಳು ಮರೆತು ಹೋಗುತ್ತಿವೆ: ಶಿವಾನಂದ ಸ್ವಾಮಿಗಳು
ಕುಲಗೋಡ: ಮೊಬೈಲ್ ಯುಗದಲ್ಲಿ ಗುರು ಹಿರಿಯರ ನಾಮಸ್ಮರಣೆ ಮಾಡುವದು ಮರೆಯಾಗಿ ಹೊಗಿದೆ. 20 ವರ್ಷಗಳ ಬಳಿಕ ಸ್ನೇಹಿತರು ಸೇರಿ ಗುರುವಂದನೆ ಮಾಡಿದ್ದು ಅಪರೂಪ ಎಂದು ಮ.ನಿ.ಪ್ರ.ಸ್ವ ಶಿವಾನಂದ ಮಹಾಸ್ವಾಮಿಗಳು ಶ್ರೀ ಜಡಿಸಿದ್ದೇಶ್ವರ ಮಠ ಸುಣಧೋಳಿ ಹೇಳಿದರು. ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದ ಎನ್.ಎಸ್.ಎಫ್ ಶಾಲೆಯಲ್ಲಿ 2002-03 ನೇ ಸಾಲಿನ ಹಳೆಯ ವಿಧ್ಯಾರ್ಥಿಗಳಿಂದ ಇಂದು ನಡೆದ ಗುರುವಂದನಾ ಹಾಗೂ ಸ್ನೇಹ ಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನ ಬೆಳೆದು ಮಾನವನ …
Read More » -
20 ಆಗಷ್ಟ್
ಶಾಲಾ ವಾಹನ ಚಾಲಕರಿಗೆ ಎಚ್ಚರಿಸುವಂತೆ ಮೂಡಲಗಿ ಪುರಸಭೆ ಸದಸ್ಯರಿಂದ ಮನವಿ
ಮೂಡಲಗಿ: ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜು ವಾಹನ ಚಾಲಕರನ್ನು ಹಾಗೂ ಶಾಲಾ ಮುಖ್ಯಸ್ಥರನ್ನು ಕರೆಸಿ ವಾಹನ ನಿಧಾನವಾಗಿ ಚಲಿಸಲು ನಿರ್ದೇಶನ ನೀಡಬೇಕು, ಶಾಲಾ ಮಕ್ಕಳಿಗೆ ಹಾಗೂ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಯಾವುದೇ ರೀತಿಯ ಅನಾಹುತವಾಗುವುದನ್ನು ತಪ್ಪಿಸುವ ಸಲುವಾಗಿ ಮಕ್ಕಳ ಹಿತದೃಷ್ಟಿಯಿಂದ ಜನಸೇವಾ ಗೆಳೆಯರ ಬಳಗ ಸದಸ್ಯರು ಹಾಗೂ ಪುರಸಭೆ ಸದಸ್ಯರು ಪಿಎಸ್ಐ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹನುಮಂತ ಗುಡ್ಲಮನಿ,ಪುರಸಭೆ ಸದಸ್ಯರಾದ …
Read More » -
20 ಆಗಷ್ಟ್
ಸಿಎಂ ಬಸವರಾಜ ಬೊಮ್ಮಾಯಿಯವರು ನೀಡಿದ ಭರವಸೆಯಂತೆ ಅ.22ರಂದು 2ಎ ಮೀಸಲಾತಿಯನ್ನು ಘೋಷಣೆ ಮಾಡದಿದ್ದರೆ ಉಪವಾಸ ಸತ್ಯಗ್ರಹ ಮಾಡಲಾಗುವುದು- ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ
ಮೂಡಲಗಿ: 2ಎ ಮೀಸಲಾತಿಯನ್ನು ಅ.22ರ ಒಳಗಾಗಿ ಘೋಷಣೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿಯವರು ನೀಡಿದ ಭರವಸೆಯಂತೆ ಅ.22ರಂದು 2ಎ ಮೀಸಲಾತಿಯನ್ನು ಘೋಷಣೆ ಮಾಡದಿದ್ದರೆ ಅ.23ರಂದು ಶಿಗ್ಗಾವ್ ಚೆನ್ನಮ್ಮ ವೃತ್ತದಲ್ಲಿ ಉಪವಾಸ ಸತ್ಯಗ್ರಹ ಮಾಡಲಾಗುವುದೆಂದು ಪಂಚಮಸಾಲಿ ಸಂಘಟನೆಯ ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷ ನಿಂಗಪ್ಪ ಪಿರೋಜಿ ಹೇಳಿದರು. ಶನಿವಾರದಂದು ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಮಹಾಪೀಠದ ಪಂಚಮಸಾಲಿ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೇತ್ಯಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿಯ …
Read More »
IN MUDALGI Latest Kannada News