100 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿ ದಾಖಲೆ ಬರೆದ ಭಾರತ.
ಮೂಡಲಗಿ: ಜನ ಮೆಚ್ಚಿದ ಪ್ರದಾನ ಮಂತ್ರಿಗಳು ನರೇಂದ್ರ ಮೋದಿಯವರಿಗೆ ಧನ್ಯವಾದಗನ್ನು
ಬಿಜೆಪಿ ಅರಬಾಂವಿ ಮಂಡಲ ಯುವ ಮೋರ್ಚಾ ವತಿಯಿಂದ ಮೂಡಲಗಿ ಕರುನಾಡು ಸೈನಿಕ ಕೇಂದ್ರದಲ್ಲಿ ಒಂದು ನೂರು ಯುವಕರು ನೂರು ಸಂಖ್ಯೆಯ ಆಕಾರದಲ್ಲಿ ಒಂದೇ ತರದ ಟಿ ಶರ್ಟ್ ಹಾಕಿಕೊಂಡು ವಿಶೇಷವಾಗಿ ಧನ್ಯವಾದ ತಿಳಿಸಿದರು.
ಅರಬಾಂವಿ ಮಂಡಲ ಅಧ್ಯಕ್ಷ ಮಹಾದೇವ ಶಕ್ಕಿ ಮಾತನಾಡಿ ಬಿಜೆಪಿ ಯುರ್ವಮೊರ್ಚಾ ಪದಾಧಿಕಾರಿಗಳ ಸಂಘಟನೆಯ ಈ ಒಂದು ಕಾರ್ಯ ನಿಜವಾಗಲು ಶ್ಲಾಘನಿವಾಗಿದೆ. ನಮ್ಮ ಅರಬಾಂವಿ ಶಾಸಕರು ಹಾಗೂ ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಇನ್ನು ಕ್ಷೇತ್ರದಲ್ಲಿ ಹೆಚ್ಚಿನ ಸಂಘಟನೆ ಮಾಡಲಾಗುವದು ಎಂದು ಹೇಳಿದರು.
ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ ಮಾತನಾಡಿ ವಿಶ್ವದಲ್ಲಿ ಭಾರತ ದೇಶ ದಾಖಲೆ ರೂಪದಲ್ಲಿ ವ್ಯಾಕ್ಷಿಣ ನೀಡುತ್ತಿದೆ ನರೇಂದ್ರ ಮೋದಿ ಸರ್ಕಾರದ ಸಾಧನೆ ಕಾರ್ಯಗಳನ್ನು ಜನರಿಗೆ ತಲುಪಿಸಬೇಕು ಎಂದರು.
ಅಬಾಂವಿ ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ದುರದುಂಡಿ ಮಾತನಾಡಿ ದೇಶಕ್ಕೆ ಅಂಟಿದ ಮಹಾಮಾರಿ ಕರೋನಾ ಓಡಿಸಲು ನರೇಂದ್ರ ಮೋದಿಯವರು ವ್ಯಾಕ್ಷೀಣ ಎಂಬ ರಾಮ ತಯಾರಿಸಿ ಇಡಿ ವಿಶ್ವಕ್ಕೆ ಮಾದರಿ ಆಗಿದ್ದಾರೆ ಎಂದು ನುಡಿದರು. ಯುವಮೋರ್ಚಾ ಅಧ್ಯಕ್ಷ ಪ್ರಮೋದ್ ನುಗ್ಗಾಣಟ್ಟಿ , ಕರುನಾಡ ಸೈನಿಕ ಕೆಂದ್ರದ ಅಧ್ಯಕ್ಷೆ ಸವಿತಾ ತುಕ್ಕನ್ನವರ, BJYM ಜಿಲ್ಲಾ ಪದಾಧಿಕಾರಿಗಳು ಗುರು ಹಿರೇಮಠ, ದುಂಡಪ್ಪ ನಂದಗಾವಿ, ಜಿಲ್ಲಾ SC ಮೋರ್ಚಾ ಪ್ರದಾನ ಕಾರ್ಯದರ್ಶಿ ಈರಪ್ಪ ಡವಳೇಶ್ವರ, ಚೇತನ ನಿಶಾನಿಮಠ,BJYM ಮಂಡಲ ಪ್ರಧಾನ ಕಾರ್ಯದರ್ಶಿ ಕೆದಾರಿ ಭಸ್ಮೆ, ಮದನ ದಾನನ್ನವರ, ಸಾವಂತ ಪಟಗುಂದಿ, ಆನಂದ ಮುಡಲಗಿ, ಶ್ರೀಶೈಲ ನಾಂವಿ ಮತ್ತು ಪ್ರಮುಖ ಪದಾಧಿಕಾರಿಗಳು ಕಾರ್ಯಕರ್ತರು ಸಂಘಟಕರು ಉಪಸ್ಥಿತರಿದ್ದರು. ಮಾಜಿ ಸೈನಿಕರಾದ ಶಂಕರ ತುಕ್ಕಣ್ಣವರ ಸ್ವಾಗತಿಸಿ ವಂದಿಸಿದರು.