Breaking News
Home / Recent Posts / ಮಾ.14ರಂದು ಸಾಯಿ ಉತ್ಸವ ಕುಲಗೋಡ-2021 ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಪ್ರವಚನ

ಮಾ.14ರಂದು ಸಾಯಿ ಉತ್ಸವ ಕುಲಗೋಡ-2021 ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಪ್ರವಚನ

Spread the love

ಮಾ.14ರಂದು ಸಾಯಿ ಉತ್ಸವ ಕುಲಗೋಡ-2021 ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಪ್ರವಚನ

ಮೂಡಲಗಿ: ತಾಲೂಕಿನ ಶ್ರೀ ಕೃಷ್ಣ ಪಾರಿಜಾತ ತವರೂರಾದ ಕಲಗೋಡ ಗ್ರಾಮದಲ್ಲಿ ಸಾಯಿ ಉತ್ಸವ ಕುಲಗೋಡ-2021 ಮತ್ತು ಶ್ರೀ ಸಾಯಿ ಜಾತ್ರಾ ಮಹೋತ್ಸವ ಹಾಗೂ 6ನೇವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ಆದ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಮಾ.14 ರಂದು ಕುಲಗೋಡ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಸಾಯಿ ಸಮೀತಿ ಹಾಗೂ ಎಮ್.ಆರ್.ಯಡಹಳ್ಳಿ ಪೌಂಡೇಶನ ಅಧ್ಯಕ್ಷ ರಾಜು ಯಡಹಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವ ಅಂಗವಾಗಿ ಮುಂಜಾನೆ 6 ಗಂಟೆಗೆ ಮಹಾಪೂಜೆ, 8ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾಧ್ಯಮೇಳದೊಂದಿಗೆ ಕುಂಭಮೇಳ ಮತ್ತು ಗ್ರಾಮ ಸಂಕೀರ್ತನೆ, ಮಧ್ಯಾಹ್ನ 12ಕ್ಕೆ ಮಹಾಪ್ರಸಾದ ಜರುಗಲಿದೆ.
ಸಂಜೆ 6ಗಂಟೆಗೆ ಸುಣಧೋಳಿ ಜದಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಶ್ರೀಗಳ ಸಾನಿಧ್ಯದಲ್ಲಿ ಖ್ಯಾತ ಪ್ರಚನ ವಾಗ್ಮಿ ಕೊಪ್ಪಳ ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳು ಅಧ್ಯಕ್ಷತೆ ವಹಿಸಿ ಪ್ರವಚನ ನೀಡುವರು. ಖಜ್ಜಿಡೋನಿಯ ಶಂಕರಾಚಾರ್ಯ ಅವಧೂತ ಆಶ್ರಮದ ಶ್ರೀ ಕೃಷ್ಣಾನಂದ ಶರಣರು ಉಪಸ್ಥಿತರಿರುವರು.
ರಾತ್ರಿ 8ಕ್ಕೆ ಸರಿಗಮಪ ಖ್ಯಾತಿಯ ಗಾಯಕರಾದ ಶ್ರೀರಾಮ ಕಾಸರ, ಆಶಾ ಭಟ್, ಸುಪ್ರೀತ್ ಪಾಲ್ಗುಣಿ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಲಿದೆ.


Spread the love

About inmudalgi

Check Also

ವಿದ್ಯಾರ್ಥಿಗಳು ಸಾಧಿಸುವ ಸಂಕಲ್ಪ ಹೊಂದಿರಬೇಕು -ಪ್ರಾಚಾರ್ಯ ವಾಯ್.ಬಿ. ಕಳ್ಳಿಗುದ್ದಿ.

Spread the love  ಮೂಡಲಗಿ : ವಿದ್ಯಾರ್ಥಿಗಳು ಸಾಧಿಸುವ ಸಂಕಲ್ಪ ಹೊಂದಿರಬೇಕು ಸಾಧನೆಗೆ ಗುರುಗಳ ಸ್ಪೂರ್ತಿಯ ಜೊತೆಗೆ ಪ್ರಯತ್ನ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ