Breaking News
Home / ತಾಲ್ಲೂಕು / ಬೆಟಗೇರಿ: ಪಾಂಡುರಂಗ ದೇವಾಲಯದಲ್ಲಿ ಆಷಾಢ ಏಕಾದಶಿ ಆಚರಣೆ

ಬೆಟಗೇರಿ: ಪಾಂಡುರಂಗ ದೇವಾಲಯದಲ್ಲಿ ಆಷಾಢ ಏಕಾದಶಿ ಆಚರಣೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪಾಂಡುರಂಗ ದೇವಾಲಯದಲ್ಲಿ ಆಷಾಢ ಏಕಾದಶಿ ದಿನವನ್ನು ಜು.25 ಮತ್ತುಜು.26ರಂದು ವಿಠ್ಠಲ-ರುಕ್ಮಿಣಿ ನಾಮಸ್ಮರಣೆ, ವಿಶೇಷ ಪೂಜೆ ಮಾಡುವ ಮೂಲಕ ಭಕ್ತಿ-ಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಜು.25ರಂದು ಬೆಳಗ್ಗೆ ಮತ್ತು ಸಂಜೆ ಹೊತ್ತು ಶ್ರೀ ಪಾಂಡುರಂಗ ವಿಠ್ಠಲನಿಗೆ ವಿಶೇಷ ಪೂಜೆ, ಅಭಿಷೇಕ ನಡೆದ ಬಳಿಕ ವಿಶೇಷ ಅಲಂಕಾರ ಮಾಡಲಾಗಿತ್ತು, ಪುರ ಜನರಿಂದ ಪೂಜೆ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದಿನವಿಡಿ ದೇವಾಲಯಕ್ಕೆ ಅಸಂಖ್ಯಾಂತ ಭಕ್ತರು ಆಗಮಿಸಿ ಪಾಂಡುರಂಗನ ದರ್ಶನ ಪಡೆದರು.
ಜು.25ರಂದು ಸಂಜೆ, ಜು.26ರಂದು ಮುಂಜಾನೆ ಹೊತ್ತು ಕರಿಕಟ್ಟಿಯ ಕೀರ್ತನ ಕೇಸರಿ ಗುರುನಾಥ ಶಾಸ್ತ್ರೀಗಳಿಂದ ಕೀರ್ತನ ಕಾರ್ಯಕ್ರಮ ಜರುಗಿದ ನಂತರ ಇಲ್ಲಿಯ ಪಾಂಡುರಂಗ ವಿಠ್ಠಲ ದೇವಾಲಯದ ಆಷಾಢ ಏಕಾದಶಿ ಆಚರಣಾ ಸಮಿತಿಯ ಸದಸ್ಯರು, ಸಂತರು ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀಗಳನ್ನು ಈ ವೇಳೆ ಸತ್ಕರಿಸಿದರು.
ಜು.25 ಮತ್ತು ಜು.26 ರಂದು ಆಷಾಢ ಏಕಾದಶಿ ದಿನದ ಪ್ರಯುಕ್ತ ಸ್ಥಳೀಯ ಪಾಂಡುರಂಗ ದೇವಾಲಯದಲ್ಲಿ ಸೇರಿದ ಭಕ್ತರು ಭಜನೆ,ಪಾಂಡುರಂಗನ ನಾಮಸ್ಮರಣೆ ಮಾಡಿದರು. ಶರಣರಾದ ರಾಮಣ್ಣ ದುಂಡಪ್ಪ ಮುಧೋಳ ಅವರಿಂದ ಮಹಾಪ್ರಸಾದ ಸೇವೆ ನಡೆಯಿತು.ನಂತರ ಆಷಾಢ ಏಕಾದಶಿ ಮತ್ತು ದ್ವಾದಶಿ ದಿನದ ವಿಶೇಷ ಕಾರ್ಯಕ್ರಮ ಸಮಾರೂಪಗೊಂಡಿತು.
ಬಸಪ್ಪ ಮುರಗೋಡ, ಸದಾಶಿವ ದಂಡಿನ, ಶಂಕರ ಸೂಜಿ, ಶಂಕರ ನಂದಿ,ಈರಪ್ಪ ದೇಯಣ್ಣವರ, ಬಸವರಾಜ ಪಣದಿ, ಫಕೀರಪ್ಪ ಹೊರಟ್ಟಿ, ವೀರನಾಯ್ಕ ನಾಯ್ಕರ, ಈರಣ್ಣ ದೇಯಣ್ಣವರ, ಬಸಪ್ಪ ಹುಬ್ಬಳ್ಳಿ, ಬಸವರಾಜ ಮುಂಡೇಶಿ, ಪಾರ್ವತೆವ್ವ ಬಳಿಗಾರ, ಬಸನಿಂಗವ್ವ ದೇಯಣ್ಣವರ, ಸುಮ್ಮವ್ವ ಆನೆಗುಂದಿ, ಗಣ್ಯರು, ಆಷಾಢ ಏಕಾದಶಿ ಆಚರಣಾ ಸಮಿತಿ ಪದಾಧಿಕಾರಿಗಳು,ಸದಸ್ಯರು, ಸಂತರು, ಶರಣರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About client

Check Also

ಶ್ರೀ ಮಹಾಲಕ್ಷ್ಮೀದೇವಿ ಗದ್ಗುಗೆ ವಿಶೇಷ ಮಹಾಪೂಜೆ

Spread the loveಲಕ್ಷ್ಮೀ…ಮಹಾಲಕ್ಷ್ಮೀ ಕಾಪಾಡಮ್ಮ..! ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿದ ಪ್ರಯುಕ್ತ ವಾರದ ದಿನ ಶುಕ್ರವಾರ ಜು.31ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ